"ಸಿರಿಗನ್ನಡಂ ಗೆಲ್ಗೆ" "ಜೈ ಕರ್ನಾಟಕ ಮಾತೆ" "ಸಿರಿಗನ್ನಡಂ ಬಾಳ್ಗೆ"
ಸಮಸ್ತ ಕನ್ನಡ ಕುಲಕೋಟಿಗೆ 'ಕನ್ನಡ ರಾಜ್ಯೋತ್ಸವದ ಶುಭಾಶಯಗಳು'.
[ಸೂಚನೆ:೧)ತನ್ನ ಆದರ್ಶಗಳನ್ನು ಮಾರಿಕೊಳ್ಳದ ಕರುನಾಡ ಜನತೆಯಲ್ಲಿ ನೀವೊಬ್ಬರಾಗಿದ್ದರೆ ನೀವು ಈ ಬರಹವನ್ನು ಸಂಪೂರ್ಣವಾಗಿ ಓದಬೇಕು.. ಇಲ್ಲವಾದಲ್ಲಿ ದಯವಿಟ್ಟು ಓದಲು ಪ್ರಾರಂಭ ಮಾಡುವುದೇ ಬೇಡ.
೨)ಇಲ್ಲಿ ಪ್ರಸ್ತಾಪಿಸಿರುವ ವಿಷಯ ಹೀಗಾಗಲೇ ತಿಳಿದಿರುವ ವಿಷಯ ಆಗಿರಬಹುದು ,ಆದರೆ ನನಗೆ ಬರೆಯಬೇಕೆಂದು ಅನಿಸಿರುವುದರಿಂದ ಬರೆಯುತ್ತಿದ್ದೇನೆ..ಇದೇನು ನಿಮಗೆ ಹೊಸದಲ್ಲ ಎನಿಸಬಹುದು.
೩)ಈ ಬರಹವು ಯಾವುದೇ ವ್ಯಕ್ತಿಗೆ ಬೇಕಾದರೂ ಹೋಲಿಕೆಯಾಗಬಹುದು.]
ಇಲ್ಲಿ ನನಗೆ ಮೂಡಿರುವ ಪ್ರಶ್ನೆ...
ಪಂಚಕೋಟಿ ಕರುನಾಡಿನವರಲ್ಲಿ ಕನ್ನಡಿಗರೆಷ್ಟು?
ಪುಣ್ಯಭೂಮಿ ಕರುನಾಡಲ್ಲಿ ಜನ್ಮತಳೆದು,ಇಲ್ಲಿನ ಸಂಪತ್ತಿನಿಂದಲೇ ಬದುಕಿ,ಇಲ್ಲೇ ಹತರಾಗಬೇಕಾದ ಕೋಟ್ಯಾನುಕೋಟಿ ಮಕ್ಕಳು ನಮ್ಮ ಕನ್ನಡ ತಾಯಿಗೆ ಇದ್ದಾರೆ..ಆದರೆ ಅವರಲ್ಲಿ ಕೆಲವರು ಮಾತ್ರ ನಿಜವಾದ ಕನ್ನಡಿಗರು ಎಂದು ನನ್ನ ಅನಿಸಿಕೆ...
ಇನ್ನುಳಿದ ಹಲವಾರು ಮಹಾಶಯರು ತಾವು ಕನ್ನಡದವರು ಎಂಬುದನ್ನು ಮರೆತು ತಮ್ಮ ಮಕ್ಕಳು ಕನ್ನಡ ಕಲಿಯಲು "ಅಮ್ಮಾ" ಎಂದು ಓಂಕಾರ ಹಾಕುವ ಮುನ್ನವೇ ಅವರನ್ನು ಆಂಗ್ಲದ ಮಡಿಲಲ್ಲಿ ಹಾಕಿ 'ಮಮ್ಮಿ' ಎಂದು ಹೇಳಿಸಿ (ಇನ್ನೊಂದು ರೀತಿಯಲ್ಲಿ ಅವರ ಕನ್ನಡಾಭಿಮಾನವನ್ನು ಮಮ್ಮಿ (ಶವ)ಮಾಡಿ )ಆಂಗ್ಲ ಕಲಿಯಲು ಓಂಕಾರ ಹಾಕಿಸಿಬಿಡುತ್ತಾರೆ.. ಹಾಗೆ ಬೆಳೆದ ಮಕ್ಕಳು ಮುಂದೆ 'ಕನ್ನಡ' ತಮ್ಮ ಮಾತೃಭಾಷೆ ಎಂಬುದನ್ನು ಮರೆತು ಕನ್ನಡದ ಬಗ್ಗೆ ತಾತ್ಸಾರ ಹೊಂದುತ್ತಾರೆ.. ಅವರು ವಯಸ್ಕರಾದಂತೆ ಅವರಿಗೆ ಕನ್ನಡ ಅಲರ್ಜಿ ಆಗಿಬಿಡುತ್ತದೆ.. ಶಾಲಾ ಕಾಲೇಜಿನಲ್ಲಿ ಕನ್ನಡ ತರಗತಿ ಎಂದರೆ ಜಿಗುಪ್ಸೆ ಬರುವಂತಾಗುತ್ತದೆ.. ಮುಂದೆ ಮುಂದೆ ಹೋದಂತೆ ಕೆಲ ಉನ್ನತ ಶಿಕ್ಷಣದಲ್ಲಿ ಕನ್ನಡ ವಿಷಯವೇ ಇರುವುದಿಲ್ಲ.. ಚಲಚಿತ್ರಗಳ ವಿಷಯದಲ್ಲೂ ಕೂಡ ಕನ್ನಡಕ್ಕಿಂತ ಆಂಗ್ಲವೇ ಅವರಿಗೆ ಅಚ್ಚುಮೆಚ್ಚಾಗಿ ಪರಿಣಮಿಸುತ್ತದೆ.. ಕನ್ನಡವನ್ನು ಉತ್ತೀರ್ಣವಾಗಲು ಮಾತ್ರ ಓದಬೇಕು ಎಂಬ ಮನೋಜ್ಞಾನ ಅವರಲ್ಲಿ ಮೂಡುತ್ತದೆ... ಕನ್ನಡದ ಜನರು,ಕನ್ನಡದ ಕಾರ್ಯಕ್ರಮಗಳು,ಕನ್ನಡ ಮಾತು ಅವರಿಗೆ ಬೇಸರವೆಂದೆನಿಸುತ್ತದೆ... ಅನಾವಶ್ಯಕವಾಗಿ ಆಂಗ್ಲ ಬಳಸಿ ಕನ್ನಡವನ್ನೇ ಮರೆತುಬಿಡುತ್ತಾರೆ.. ಇಂಥ ಮಕ್ಕಳು ಹುಟ್ಟುವಾಗ ಕನ್ನಡಮ್ಮನ ಮಕ್ಕಳಾಗಿ ಹುಟ್ಟಿದರೂ ಬೆಳೆಯುವುದು ಮಾತ್ರ ಆಂಗ್ಲದ ಪೋಷಣೆಯಲ್ಲಿ..
ಈ ಮಕ್ಕಳನ್ನು ಈ ಸ್ಥಿತಿಗೆ ತಂದ ಜನ್ಮಜರಲ್ಲಿ ಕೆಲವರಂತೂ 'ಕನ್ನಡಿಗ' ಎಂಬ ಹಣೆಪಟ್ಟಿ ಧರಿಸಿ ಕನ್ನಡದ ಸಂಘಟನೆಗಳಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಿರುತ್ತಾರೆ... ನಿಮ್ಮ ಮಕ್ಕಳನ್ನು ಮಾತ್ರ ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿ ಮಾತೃಭಾಷೆ ಕಲಿಸಿರುವುದರ ಕಾರಣ ಕೇಳಿದರೆ ನಮ್ಮ ಮಕ್ಕಳು ಚೆನ್ನಾಗಿ ಓದಿ ಮುಂದೆ ಡಾಕ್ಟರ್/ಎಂಜಿನಿಯರ್ ಆಗಬೇಕು,ಅದಕ್ಕೆ ಮೂಲ ಆಂಗ್ಲ ಭಾಷೆ ಚೆನ್ನಾಗಿರಬೇಕು... ಎಂದೆನ್ನುತ್ತಾರೆ.. ಅದೂ
ಅಲ್ಲದೆ ತಮ್ಮ ಮಕ್ಕಳು ಹಾಗಾದ್ದಲ್ಲಿ ಕನ್ನಡಕ್ಕೆ ಕೀರ್ತಿ ತಾನೇ! ಎನ್ನುತ್ತಾರೆ?
ಏಕೆ... ಕನ್ನಡ ಮಾಧ್ಯಮದಲ್ಲಿ ಓದಿ ಮಾತೃಭಾಷೆಯನ್ನೂ ಕಲಿತು ಮುಂದೆ ವೈದ್ಯ/ತಂತ್ರಜ್ಞ ರಾಗಿರುವವರಿಲ್ಲವೇ?
ಅವರ ತಂದೆತಾಯಿಯರನ್ನು ಬಿಡಿ ಮಕ್ಕಳಾದರೂ ದೊಡ್ಡವರಾದಮೇಲೆ ತಮ್ಮ ಮಾತೃಭಾಷೆಯ ಬಗ್ಗೆ ತಿಳಿಯಬೇಕು ಅದನ್ನೇ ಬಳಸಬೇಕು,ಅದನ್ನು ಪ್ರೀತಿಸಿ ಬೆಳೆಸಬೇಕು ಎಂಬ ಮನೋಜ್ಞಾನ ಬೆಳೆಸಿಕೊಳ್ಳಬೇಡವೇ..?
ಬಿಡಿ ಕೆಲ ಮಕ್ಕಳಿಗೂ ಅದು ಬೇಕಿರುವುದಿಲ್ಲ .. ಅವರು ಹೆಸರಿಗೆ ಮಾತ್ರ ಕನ್ನಡದವರು ಇನ್ನೆಲ್ಲವೂ ಆಂಗ್ಲಮಯ.. ಅವರನ್ನು
ಪ್ರಶ್ನಿಸಿದರೆ, ಹಾಗಾದರೆ ಕರ್ನಾಟಕದಲ್ಲಿ ಎಲ್ಲರೂ ಕನ್ನಡವನ್ನು ಪ್ರೀತಿಸುವವರೇ ಇದ್ದಾರೆಯೆ? ಎಂಬ ತರ್ಕವಿಲ್ಲದ ಉತ್ತರ ನೀಡುತ್ತಾರೆ. ಅದು ಸರಿಯೇ ಅನ್ನಿ ಕರ್ನಾಟಕದ ಈಗಿನ ಪರಿಸ್ಥಿತಿಯೂ ಹಾಗೆ ಇದೆ.. ಎಲ್ಲವೂ ಆಂಗ್ಲಮಯ.. ಪರಿಸ್ಥಿತಿಯೇ ಹೀಗಿರುವಾಗ ಕನ್ನಡದ ಸ್ಥಿತಿ ಕೇಳಬೇಕೆ..?
ಇನ್ನು ಕನ್ನಡದ ಜನತೆ... ಕೆಲವು ಹಳ್ಳಿಗಾಡಿನ ಪ್ರದೇಶಗಳನ್ನು ಬಿಟ್ಟರೆ(ಅಲ್ಲೂ ಕೂಡ ಕನ್ನಡ ಮತ್ತು ಆಂಗ್ಲ ಮಿಶ್ರಿತವಾಗಿ ಬಳಕೆಯಾಗುತ್ತಿದೆ) ನಗರ ಪ್ರದೇಶದ ಜನರಂತೂ ಕನ್ನಡವನ್ನು ಮರೆತೇಬಿಟ್ಟಿದ್ದಾರೆ... ಆಂಗ್ಲವನ್ನು ಚೆನ್ನಾಗಿ ಅರಿತ ಜನರಿಗೆ ಹಳ್ಳಿಗಾಡಿನ ಕನ್ನಡಿಗರ 'ಕನ್ನಡ ಭಾಷೆ' ಇಷ್ಟವಿಲ್ಲ.. ಅವರಿಗೆ ಆಂಗ್ಲ ಮಾತನಾಡುವವರನ್ನು ಕಂಡರೆ ಅಚ್ಚುಮೆಚ್ಚು..(ಎಷ್ಟೇ ಆದರೂ ಹೊತ್ತ ಕನ್ನಡ ತಾಯಿಗಿಂತ ಸಾಕಿದ ಆಂಗ್ಲವೇ ಮುಖ್ಯವೆನಿಸಿತೇನೋ?) ಹೀಗಾದಾಗ ಹಳ್ಳಿಯ ಆಂಗ್ಲ ಬರದ ಜನರು ಆಂಗ್ಲ ಬರುವ ಜನರ ಮುಂದೆ ತಲೆತಗ್ಗಿಸಲಾಗದೆ ಆಂಗ್ಲ ಕಲಿಯಲು ಮುಂದಾಗಿ ಕನ್ನಡ ಮರೆಯುತ್ತಾರೆ.. ಆಂಗ್ಲ ಮೆರೆಸುತ್ತಾರೆ.. ಹೀಗಾಗಿ ಕರ್ನಾಟಕದಲ್ಲಿ ಕನ್ನಡ ಬಂದರೂ ಕನ್ನಡ ಮಾತನಾಡಲೂ ಇಚ್ಚಿಸದ ಜನರಿದ್ದಾರೆ.. ಕನ್ನಡನಾಡಿನಲ್ಲಿ ಸಮೃದ್ಧವಾಗಿ ಬದುಕಬೇಕಾದರೆ ಕನ್ನಡ ಮರೆಯಬೇಕು ಎಂಬ ಸ್ಥಿತಿ ತಲುಪುತ್ತಾರೆ..ಕೇವಲ ಕನ್ನಡ ಕಲಿತಿರುವ ಜನರು ಮುಂದೆ ಜೀವನೋದ್ಧಾರಕ್ಕೆ ಆಂಗ್ಲದಲ್ಲಿ ಪರಿಣಿತರಾಗಲೆಬೇಕಾದ ಪರಿಸ್ಥಿತಿ ಇದೆ.. ತಮ್ಮ ನಾಡು,ಭಾಷೆ.. ಎಂದು ಅರಿವಿರುವ ಜನರೇ ಹೀಗಿರುವಾಗ ಹಳ್ಳಿಗಾಡಿನಲ್ಲಿ ಕೇಳಬೇಕೆ? ಅಲ್ಲಿನ ಆಂಗ್ಲ ಎಂದರೇನು ಎಂದು ತಿಳಿಯದವರು ಕೂಡ ತಮ್ಮ ಮಕ್ಕಳು ಆಂಗ್ಲ ಕಲಿಯಲೆಂದು ಇಚ್ಛೆ ಪಟ್ಟು ಆಂಗ್ಲ ಕಲಿಯಲು ಬಿಡುತ್ತಾರೆ,ತಮ್ಮ ಮಗು ಒಂದೆರಡು ಆಂಗ್ಲ ಪದ ಕಲಿತರೆ ಅದೇ ಅವರಿಗೆ ಖುಷಿಯ ವಿಷಯ.. ಅವರಿಗೂ ತಮ್ಮ ಮಗು ಆಂಗ್ಲ ಮಾಧ್ಯಮ ಶಾಲೆಯಲ್ಲೇ ಓದಬೇಕೆಂಬ ಆಸೆ..
ಹೀಗಾಗಿ ಕನ್ನಡದಲ್ಲಿರುವ ಕನ್ನಡದ ಮುತ್ತು ಮಣಿಗಳೂ ಕನ್ನಡದ ಮಣ್ಣಿನಲ್ಲಿ ಕನ್ನಡವೇ ಹೂತುಹೋಗುತ್ತಿರುವುದ ನೋಡಿ ಕಂಬನಿ ಮಿಡಿಯುತ್ತಾರೆ...
ಸಂಪರ್ಕ ಸಾಧನವಾದ ಚಲನ ದೂರವಾಣಿ (ಮೊಬೈಲ್ ಫೋನ್ )ಅನ್ನೇ ತೆಗೆದುಕೊಳ್ಳಿ.. ಎಷ್ಟು ರೀತಿಯಲ್ಲಿ ಅವು ನಮಗೆ ಕಾಣಸಿಗುತ್ತವೆ, ಆದರೆ ಕನ್ನಡ ಅಕ್ಷರಕ್ಕೆ ಸ್ಪಂದಿಸುವ ಚಲನ ದೂರವಾಣಿ ಒಂದೆರಡು ಅಷ್ಟೆ..
ಅವುಗಳನ್ನು ಉಪಯೋಗಿಸುವ ಕನ್ನಡ ಜನರಿಗೆ ಕನ್ನಡದಲ್ಲಿ ಸಂದೇಶ ರವಾನೆಗೆ ಅವಕಾಶವೇ ಇಲ್ಲ.. ಕನ್ನಡದ ಹಬ್ಬದ ಶುಭಾಶಯ ಕೂಡ ಆಂಗ್ಲದಲ್ಲೇ ತಲುಪಿಸುತ್ತಾರೆ..
ಇನ್ನೂ ಕೆಲ ವಿಷಯಗಳಂತೂ .... ! ಕನ್ನಡ ಪಾಠ ಹೇಳುವ ಕೆಲ ಕನ್ನಡ ಉಪನ್ಯಾಸಕರಿಗೆ ಕನ್ನಡ ಸರಿಯಾಗಿ ಬರುವುದಿಲ್ಲ... ಕೆಲ ಕನ್ನಡ ಉಪನ್ಯಾಸಕರು ಮಾತನಾಡುವುದು ಕೇವಲ ಆಂಗ್ಲದಲ್ಲಿ(ಅವರಿಗೆ ಕನ್ನಡ ಬರುತ್ತೋ.. ಅಥವಾ ಬೇಕೆಂತಲೇ ಆಂಗ್ಲ ಮಾತನಾಡುತ್ತಾರೋ? ತಿಳಿಯದು).. ಕನ್ನಡದಲ್ಲಿ ವಾಹನಗಳಿಗೆ ಸಂಖ್ಯೆ ಬರೆಯಿಸಿದರೆ ಓದಲು ಬಾರದ ಕೆಲ ಸಂಚಾರ ನಿಯಂತ್ರಣ ರಕ್ಷಕರೂ ಇದ್ದಾರೆ.. ಕನ್ನಡ ರಾಜ್ಯೋತ್ಸವದಲ್ಲಿ ಕನ್ನಡ ಧ್ವಜ ಹಾರಿಸುವವರಿಗೆ ಸಂಪೂರ್ಣ ಕನ್ನಡ ಬಾರದೆಯೂ ಇರಬಹುದೆಂದು ನನ್ನ ಅನಿಸಿಕೆ....
ಒಂದು ನಾಡಿನಲ್ಲಿ ಆ ನಾಡಿನ ಭಾಷೆಯ ಶಾಲೆಗಳು ಹೆಚ್ಚಾಗಿರಬೇಕು.. ಕನ್ನಡ ಭೂಮಿಯಲ್ಲಿ ಕನ್ನಡ ಶಾಲೆಗಳಿಗಿಂತ ಆಂಗ್ಲ ಶಾಲೆಗಳೇ ಹೆಚ್ಚಿವೆ ... ಕೇವಲ ಕನ್ನಡ ಕಲಿತಿರುವ ಜನರು ಮುಂದೆ ಜೀವನೋದ್ಧಾರಕ್ಕೆ ಆಂಗ್ಲದಲ್ಲಿ ಪರಿಣಿತ ಆಗಲೇಬೇಕಾದ ಪರಿಸ್ಥಿತಿ ಇದೆ..
'ಕನ್ನಡ ನನ್ನ ಉಸಿರು','ಕನ್ನಡವೇ ಸತ್ಯ ಕನ್ನಡವೇ ನಿತ್ಯ','.......ಮುಂತಾದ ಕನ್ನಡ ಬರಹಗಳು.. ಇಂಥ ಮಾತಾಡುವ ಜನರೆಂದರೆ ನಕ್ಕು ಬಿಡುವ ಈ ನಾಡಲ್ಲಿ 'ಮಾತೃ ಪ್ರೇಮ' ಉಕ್ಕಿಸುವೆ ಎಂದು ಹೇಳುವವನು ಹುಚ್ಚನಾಗಬಹುದು..
ಇನ್ನೂ ಕನ್ನಡ ಸಂಸ್ಕೃತಿ ಬಗ್ಗೆ ಹೇಳಬೇಕೆ? ಗಂಡು ಮಕ್ಕಳಂತೆ ಬಟ್ಟೆ ಧರಿಸಿ ನಾನು ಗಂಡಿಗಿಂತ ಕಡಿಮೆಯಿಲ್ಲ ಎಂದು ಸ್ಪರ್ಧಿಸಲು ನಿಂತಿರುವ ಹೆಣ್ಣುಮಕ್ಕಳು ಹೆಚ್ಚಿದ್ದಾರೆ.. ಕನ್ನಡತಿಯಂತೆ ಕಾಣುವ ಹೆಣ್ಣು ಮಕ್ಕಳು ಎಲ್ಲಿದ್ದಾರೋ? ಇದುವರೆಗೆ ಅಲ್ಪಸ್ವಲ್ಪ ಕನ್ನಡ ಉಳಿದಿರುವ ಹಳ್ಳಿಗಾಡಿನ ಪ್ರದೇಶದಲ್ಲೂ ನಾನು ಅವರನ್ನು ನೋಡಿಲ್ಲ.. ಇಲ್ಲೇ ಹೀಗೆ ಎಂದರೆ ನಗರ ಮುಂದುವರಿದ ನಗರ ಪ್ರದೇಶದಲ್ಲಿ..? ಇನ್ನೂ ಮುಂತಾದ ಸಂಸ್ಕೃತಿಗೆ ಧಕ್ಕೆ ತರುವ ಕಾರ್ಯಗಳಿವೆ...
ಇಲ್ಲಿ ಕೆಲವು ಕಠಿಣ ಕನ್ನಡ ಪದಗಳನ್ನು ಬರೆಯಲು ಬಾರದವರಿದ್ದಾರೆ.. ಕನ್ನಡ ಧ್ವಜವನ್ನೇ ನೋಡದವರಿದ್ದಾರೆ.. ಕನ್ನಡವೇ ಬೇಡ ಎನ್ನುವ ತಂದೆ-ತಾಯಿಯರಿದ್ದಾರೆ,ಮಕ್ಕಳಿದ್ದಾರೆ.. ಮತ್ತೊಂದು ವಿಷಯ.. ಹಲವಾರು ಕನ್ನಡ ಬ್ಲಾಗಿಗರು ನಮ್ಮಲ್ಲಿದ್ದಾರೆ.. ನಾನು ನೋಡಿದ ಶೇಕಡ ೮೮ ಬ್ಲಾಗಿನಲ್ಲಿ ಕನ್ನಡ ಪದಗಳು ತಪ್ಪು ತಪ್ಪಾಗಿ ಮೂಡಿಬರುತ್ತಿವೆ..
ಇದು ಯಾರ ತಪ್ಪು? ಯಾರ ಶಾಪ? ಯಾರ ಪಾಪ? ಯಾರ ಪುಣ್ಯ?
ಹೀಗಿರುವಾಗ ಪಂಚಕೋಟಿ ಜನರಿರುವ ಕನ್ನಡನಾಡಿನಲ್ಲಿ ನಿಜವಾದ ಕನ್ನಡಿಗರೆಷ್ಟು?
ನಾನು ಬಹಳಷ್ಟು ಕನ್ನಡ ಬ್ಲಾಗಿಗರು ಈ ಬರಹ ಓದಬೇಕೆಂಬ ಸಣ್ಣ ಆಸೆ ಇಟ್ಟುಕೊಂಡಿದ್ದೇನೆ,ದಯವಿಟ್ಟು ಇದನ್ನು ಓದಿದವರು ನಿಮ್ಮ ನೆರೆಯ ಬ್ಲಾಗಿಗರಿಗೂ ತಿಳಿಸುವಿರಾ...
ಮತ್ತೊಮ್ಮೆ ಅಮೋಘವಾಗಿ "ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು"
ಮತ್ತೊಮ್ಮೆ "ಕನ್ನಡ ರಾಜ್ಯೋತ್ಸವದ ಶುಭಾಷಯ" ತಿಳಿಸುತ್ತಾ ವಂದಿಸುತ್ತೇನೆ.
--ಧನ್ಯವಾದಗಳು..
ನಿಮ್ಮ ಬರಹ ನಿಜಕ್ಕೂ ಸತ್ಯ. ಒಂದು ಕಡೆ ಕನ್ನಡದಲ್ಲಿ ಮಾತಾಡುವುದು ಕೀಳು, ಕನ್ನಡ ಓದಿದರೆ, ಕಲಿತರೆ ದಂಡ, ಜೀವನಕ್ಕೆ ಸಾಕಾಗುವ ಜ್ಞಾನ ಅದಲ್ಲ ಎಂಬ ಆಂಗ್ಲ ಅಂದಾಭಿಮಾನಿಗಳು, ಇನ್ನೊಂದೆಡೆ ಹೋರಾಟ, ಹಾರಾಟ, ಚೀರಾಟವೇ ಕನ್ನಡ ಪ್ರೇಮ ಎಂದು ನಂಬಿರುವ 'ಉಟ್ಟು ಓರಾಟಗಾರರು' ಎಂದು ವ್ಯಂಗದಿಂದ ಕರೆಸಿಕೊಳ್ಳುವ ನಾಯಿಕೊಡೆಗಳಂತೆ ತಲೆ ಎತ್ತಿರುವ ಕನ್ನಡ ಸಂಘಟನೆಗಳು. ಇವೆರಡರ ಮಧ್ಯೆ ಕನ್ನಡ ಸೊರಗುತ್ತಿದೆ.
ಪ್ರತ್ಯುತ್ತರಅಳಿಸಿಕನ್ನಡದಲ್ಲಿ ಅತಿಯಾದ ಆಂಗ್ಲ ಬಳಕೆ ಬಗ್ಗೆ ನಾನು ನನ್ನ ಬ್ಲಾಗಿನಲ್ಲಿ ಬರೆದಿದ್ದೆ - http://ini-dani.blogspot.com/2008/06/blog-post_25.html#links
ನಮಸ್ತೆ,
ಪ್ರತ್ಯುತ್ತರಅಳಿಸಿನೀವು ಹೇಳುವುದು ನಿಜ, ನನ್ನ ಮಗನಿಗೆ ಅಮ್ಮನನ್ನು ಅಮ್ಮ ಅಪ್ಪನನ್ನು ಅಪ್ಪಾ ಎಂದೇ ಕರೆಯಬೇಕೆಂದು ಹೇಳಿದೆ ಹಾಗೆಯೇ ಕರೆಯುತ್ತಲಿದ್ದ... ಒಮ್ಮೆ ತನ್ನ ಸ್ನೇಹಿತರೆಲ್ಲ ಅವರ ಅಮ್ಮನಿಗೆ ಮಮ್ಮಿ ಎಂದು ಕರೆಯುತ್ತಾರೆಂದು ತಿಳಿದಾಗ ನಾನು ಏಕೆ ಕರೆಯಬಾರದು ಎಂದು ಪ್ರಶ್ನಿಸಿದ್ದ...ನಾನು ಅದಕ್ಕೆ ನಮ್ಮ ಭಾಷೆಯಲ್ಲಿ ಹೇಗಿರುವುದೋ ಅದನ್ನು ಕರೆದರೆ ನನಗಿಷ್ಟವೆಂದು ಹೇಳಿದೆ ಅಲ್ಲದೆ ಅವನಿಗೂ ಸರಿ ಎಂದು ತಿಳಿದು ಅಮ್ಮ ,ಅಪ್ಪ ಎಂದೇ ಕರೆಯುತ್ತಾನೆ. ಇನ್ನು ಹುಟ್ಟುಹಬ್ಬಕ್ಕೆ ಕೇಕ್ ಏಕೆ ಕತ್ತರಿಸಬಾರದು ಎಂದು ಕೇಳಿದ ಇದು ನಮ್ಮ ಸಂಸ್ಕೃತಿಯಲ್ಲ ಬೇಡ ನಿನ್ನ ಹುಟ್ಟುಹಬ್ಬಕ್ಕೆಂದು ಖರ್ಚುಮಾಡುವ ಹಣವನ್ನು ಬೇರೆ ಬಡವರಿಗೆ ಕೊಟ್ಟರೆ ಒಂದು ದಿನದ ಊಟವಾಗುತ್ತೆಂದು ಹೇಳಿದಾಗ ಅವನಿಗೂ ಅರ್ಥವಾಗಿ ಅದು ಸರಿ ಎಂದು ಭಾವಿಸಿದ್ದಾನೆ. ಹೀಗೆ ಎಷ್ಟೋ ಯಕ್ಷ ಪ್ರಶ್ನೆಗಳು ನಮ್ಮ ಮಕ್ಕಳಲ್ಲಿರುತ್ತೆ ಅದನ್ನು ನಿವಾರಿಸುತ್ತಲಿದ್ದರೆ ಕನ್ನಡ ಭಾಷೆ,ಸಂಸ್ಕೃತಿ ಸ್ವಲ್ಪ ಮಟ್ಟಿಗಾದರೂ ಸುಧಾರಿಸುತ್ತದೆಂಬುದು ನನ್ನ ಭಾವನೆ.
ಮತ್ತೆ ಇನ್ನು ಕನ್ನಡ ತರಗತಿಗಳಲ್ಲಿ ಓದಿದವರು ಯಾರೂ ಉನ್ನತ ಹುದ್ದೆಗೆ ಹೋಗಲಾರರೆಂಬುದು ಸುಳ್ಳು. ಎಷ್ಟೋ ಜನ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮುಗಿಸಿ ಉನ್ನತ ಸ್ಥಾನದಲ್ಲಿದ್ದಾರೆ. ನಾವು ರಜೆಗೆ ಬೆಂಗಳೂರಿಗೆ ತೆರೆಳಿದಾಗ ನನ್ನ ಮಗನನ್ನು ಕನ್ನಡ ಮಾಧ್ಯಮದಲ್ಲಿ ೩ ತಿಂಗಳ ಅಭ್ಯಾಸ ನೆಡೆಸುತ್ತೇವೆ ಅವನು ಕನ್ನಡ ಕಲಿತು ಅಲ್ಲಿನ ವಾತಾವರಣದಲ್ಲಿ ಹೂಂದಿಕೊಳ್ಳಲೆಂದು. ಇದು ನಮ್ಮ ಕೈಲಿಂದಾಗುವ ಸಣ್ಣ ಬದಲಾವಣೆಗಳಷ್ಟೆ, ಮುಂದೆ ಸಾಧ್ಯವಾದಷ್ಟು ಹೆಚ್ಚು ಕನ್ನಡದತ್ತ ಒಲವು ಬೆಳೆಸೆಕೊಳ್ಳುತ್ತೇವೆಂದು ಹೇಳಬಲ್ಲೆ.
ನಿಮ್ಮ ಬ್ಲಾಗ್ ಅಂಕಣವನ್ನು ಬಿತ್ತರಿಸಿದಾಗ ನಮಗೆ ಯಾವ ಸೂಚನೆಯೂ ಗೊತ್ತಾಗುವುದಿಲ್ಲ. ದಯವಿಟ್ಟು ಒಮ್ಮೆ ಏನಾದರೂ ತಾಂತ್ರಿಕ ದೋಷವಿದೆಯೆಂದು ನೋಡಿ...
ನೀವು ನನ್ನ ಬ್ಲಾಗಿನಲ್ಲಿ ತಪ್ಪು ಗುರುತಿಸಿ ತಿದ್ದಿದ್ದಕ್ಕೆ ಧನ್ಯವಾದಗಳು
ವಂದನೆಗಳು.
manju:
ಪ್ರತ್ಯುತ್ತರಅಳಿಸಿಹಾಯ್ ಗುರು ನಾನು ninna puc frnd ಮಂಜು.......
ನಿನ್ನ ಬ್ಲಾಗ್ನ ಅವಾಗವಾಗ ನೋಡ್ತ್ಹಿರ್ಥಿನಿ ...
ಕನ್ನಡದ ಬಗ್ಗೆ ತುಂಭ ಚೆನ್ನಾಗ ಬರೆದಿದ್ಯಾ ...
ಹೀಗೆ ಬರೆಯುತಿರು .....
bye!!
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿರಾಹುದೆಸೆಯವರೇ,...ನಿಮ್ಮ ಹೆಸರನ್ನು ತಿಳಿಸಿದರೆ ಉತ್ತಮ...
ಪ್ರತ್ಯುತ್ತರಅಳಿಸಿನಿಮ್ಮ ಕನ್ನಡಪರ ಕಳಕಳಿ ಒಪ್ಪುವಂತಹುದೇ...ಕನ್ನಡ ಬ್ಲಾಗಿಗರ ಬಗ್ಗೆ ನಿಮ್ಮ ಮಾತು ಸ್ವಲ್ಪ ಖಾರವೇ ಅನಿಸುತ್ತಿದೆ...ಏಕೆಂದರೆ ನನಗೆ ತಿಳಿದ ಕೆಲವರು ಹುಮ್ಮಸ್ಸಿನಿಂದ ಮುಂದುವರೆದವರು, ಬರವಣಿಗೆ ..ಕನ್ನಡ ಮಾತನಾಡುವವರಿಗೂ ಹಲವೊಮ್ಮೆ ಶತ-ಪ್ರತಿಶತ ಕರಾರುವಕ್ಕಾಗಿ ಮೂಡುವುದಿಲ್ಲ....ಇವರ ಉತ್ಸಾಹಕ್ಕೆ ನೀರೆರಚುವ ಬದಲು ಅವರನ್ನು ತಿದ್ದುವುದು ..ನನಗೆ ತಿಳಿದ ಉತ್ತಮ ಮಾರ್ಗ..ಇನ್ನು ಮತ್ತೆ ಕೆಲ ಬ್ಲಾಗಿಗರು..ಅಷ್ಟೇಕೆ ನಾನೇ ಮಾಡಿದ್ದೇನೆ ..ಟೈಪಾಸುರನ ಆಟಾಟೋಪಕ್ಕೆ ಬಲಿಯಾಗಿ...ಇಲ್ಲಿ ಕರಡು ತೆಗೆದು ಸರಿ ಮಾಡಿಕೊಳ್ಳುವ ಸಮಯ ಇರುವುದಿಲ್ಲ..ಹಾಗಾಗಿ ಅನಿಯಂತ್ರಿತ ತಪ್ಪುಗಳಾಗುತ್ತವೆ...
ವಾಸ್ತವ ಜೀವನದಲ್ಲಿ ಢೋಂಗಿ ಕನ್ನಡಿಗರ ನಿಮ್ಮ ಆಕ್ರೋಷಕ್ಕೆ ನನ್ನ ದನಿಯೂ ಸೇರುತ್ತೆ..
ಚನ್ನಾಗಿದೆ ನಿಮ್ಮ ಲೇಖನ...ಇದರ ಬಗ್ಗೆ ಒಂದು ವ್ಯಾಪಕ ಜನಜಾಗೃತಿಯೇ ಆಗಬೇಕಿದೆ...
deepasmitha ಅವರಿಗೆ...
ಪ್ರತ್ಯುತ್ತರಅಳಿಸಿನಮಸ್ತೆ..
ನನ್ನ ಬ್ಲಾಗಿಗೆ ಹೃತ್ಪೂರ್ವಕ ಸುಸ್ವಾಗತ..
ನಿಮ್ಮ ಬರಹ ಓದಿದೆ.. ಹೌದು ಎಲ್ಲ ಕಡೆ ಕನ್ನಡ ಆಂಗ್ಲದಲ್ಲಿ ಮುಳುಗೇಳುತ್ತಿದೆ ಎನಿಸುತ್ತಿದೆ.. ಇದನ್ನು ತಡೆಯಲು ಆದಷ್ಟು ಪ್ರಯತ್ನಿಸೋಣ..
ಮತ್ತೆ ಮತ್ತೆ ನನ್ನ ಬ್ಲಾಗತ್ತ ನೋಡುತ್ತಿರಿ..
ಧನ್ಯವಾದಗಳು...
ಮನಸು ಅವರೇ..
ಪ್ರತ್ಯುತ್ತರಅಳಿಸಿನಮಸ್ತೆ..
ಬೇರೆಯವರಿಗೋಸ್ಕರ ನಮ್ಮ ವಿವೇಕ ಮಾರಿಕೊಳ್ಳಬಾರದು ಅಲ್ಲವೇ....
ನಾನು ತಿದ್ದಿದ್ದು ಮುಖ್ಯವಲ್ಲ,ನೀವು ಮುಂದೆ ತಪ್ಪಾಗದಂತೆ ಜಾಗ್ರತಿ ವಹಿಸಿರಿ..
ವಂದನೆಗಳು..
ಮಂಜು..
ಪ್ರತ್ಯುತ್ತರಅಳಿಸಿನಮಸ್ತೆ..
ನಾನು ನಿಮ್ಮಂತಹವರ ಸಹಕಾರ ಇರೋವರೆಗೂ ಬರೀತನೆ ಇರ್ತೀನಿ,ನೀನು ಮತ್ತೆ ಮತ್ತೆ ನನ್ನ ಬ್ಲಾಗ್ ನೋಡ್ತಾ ಇರು..
ವಂದನೆಗಳು..
ಜಲನಯನ ಅವರಿಗೆ..
ಪ್ರತ್ಯುತ್ತರಅಳಿಸಿನಮಸ್ತೆ..
ನೀವು ಹೇಳೋದೂ ಸರಿ..
ಕನ್ನಡ ಬರೆಯಲು ಅಷ್ಟು ಚೆನ್ನಾಗಿ ಬರದಿದ್ದರೆ ಬರುವವರ ಹತ್ತಿರ ಸಹಾಯ ಪಡೆದು ಬರೆಯಬೇಕಲ್ಲವೇ... ನಾವು ಕನ್ನಡಿಗರಾಗಿ ತಪ್ಪು ತಪ್ಪಾಗಿ ಬರೆಯುವುದು ಅಷ್ಟು ಸೂಕ್ತ ಅಲ್ಲ ಎಂದೆನಿಸುತ್ತದೆ ..
ಆ ವ್ಯಾಪಕ ಜಾಗೃತಿಗೆ ಸಹಕರಿಸೋಣ..
-ವಂದನೆಗಳು..
ರಾಹುದೆಸೆ...
ಪ್ರತ್ಯುತ್ತರಅಳಿಸಿ(ನಿಮ್ಮ ಹೆಸರು ತಿಳಿಯದೇ ಇರೋದ್ರಿಂದ ಹೀಗೆ ಕರೆಯಬೇಕಾಯ್ತು)
ನಿಮ್ಮ ಕನ್ನಡ ಪ್ರೀತಿ ಮೆಚ್ಚುವಂತಾದ್ದೆ.... ಕನ್ನಡದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವದು, ಹಾಗೂ ಕನ್ನಡದ ಬಗ್ಗೆ ಎಲ್ಲರಿಗೂ ಪ್ರೀತಿ ಹುಟ್ಟುವಂತೆ ಮಾಡಬೇಕಾದ್ದು ಈ ಕ್ಷಣದ ಅವಶ್ಯಕತೆ... ಆದರೆ ಆಜಾದ್ ರವರು ಹೇಳಿದಂತೆ ನೀವು ಕನ್ನಡ ಬ್ಲಾಗಿಗರ ಬಗ್ಗೆ ಇಷ್ಟು ಕೋಪಗೊಳ್ಳೋದು ಅವಶ್ಯಕವಿಲ್ಲ ಅಂತಲೇ ನನ್ನ ಅನಿಸಿಕೆ... ಕನ್ನಡದಲ್ಲಿ ಬ್ಲಾಗ್ ಬರೆಯುವಾಗ ಕೆಲವೊಂದು ಅಕ್ಷರ, ಪದ ದೋಷಗಳು ಸಾಮಾನ್ಯ.. ಉದಾಹರಣೆಗೆ ನಿಮ್ಮ ಈ ಲೇಖನದ ಆರಂಭದಲ್ಲೇ "೨)ಇಲ್ಲಿ ಪ್ರಸ್ತಾಪಿಸಿರುವ ವಿಷಯ ಹೀಗಾಗಲೇ ತಿಳಿದಿರುವ ವಿಷಯ ಆಗಿರಬಹುದು ,ಆದರೆ ನನಗೆ ಬರೆಯಬೇಕೆದು ಅನಿಸಿರುವುದರಿಂದ ಬರೆಯುತ್ತಿದ್ದೇನೆ..ಇದೇನು ನಿಮಗೆ ಹೊಸದಲ್ಲ ಎನಿಸಬಹುದು." ಅಂತ ಇದೆ.. ಇದರಲ್ಲಿ ಹೀಗಾಗಲೇ ಅಂತ ಬರೆದಿರೋದು ಕನ್ನಡ ಬೆರಳಚ್ಚಿನಲ್ಲಿ ಆದ ವ್ಯತ್ಯಾಸವೇ ಅಲ್ಲವೇ..?? "ಹೀಗಾಗಲೇ" ಬದಲು ಈಗಾಗಲೇ ಅಂತ ಆಗಬೇಕಿತ್ತು... ತಿಳಿದವರು ತಿಳಿಸಿ ಹೇಳಿದರೆ ತಿದ್ದಿಕೊಳ್ಳುವಷ್ಟು ವ್ಯವದಾನ ಎಲ್ಲ ಕನ್ನಡ ಬ್ಲಾಗಿಗರಲ್ಲೂ ಇದೆ ಅನ್ನೋದೇ ನನ್ನ ಭಾವನೆ...
ದಿಲೀಪ್ ಹೆಗ್ಡೆ ಅವರಿಗೆ..
ಪ್ರತ್ಯುತ್ತರಅಳಿಸಿನಮಸ್ತೆ..
ನೀವು ಹೇಳೋದು ಸರಿ.. ಆದರೆ ನಾನು ಕೆಲವು ಬ್ಲಾಗಿಗರ ತಪ್ಪನ್ನು ಗುರುತಿಸಿ ಅವರಿಗೆ ಹೇಳಿದಾಗ ಅವರು ತಮ್ಮ ತಪ್ಪನ್ನು ಒಪ್ಪದೇ ಇದ್ದಾರೆ.. ಅದಕ್ಕಾಗಿ ಹಾಗೆ ಹೇಳಬೇಕಾಯಿತು..
ನನ್ನ ದೋಷವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು..
ಜಲನಯನ & ದಿಲೀಪ್ ಅವ್ರೆ ನನ್ನ ಹೆಸರಿಗಿಂತ ರಾಹುದೆಸೆ ಅಂದರೆ ನನಗೆ ಸಂತೋಷ..
ವಂದನೆಗಳು..